ಗಾಂಧಿ.
ಸತ್ತು ಹೋಗಿರುವ ಗಾಂಧಿ
ನೀನೂ ಒಬ್ಬ ಮನುಷ್ಯ
ಭೇದ ಭಾವವ ಅಳಿಸಲು
ಹರಿಜನೋದ್ಧಾರದ
ಮಾತುಗಳನ್ನುದುರಿಸಿದ ಗಾಂಧಿ;
ತುಂಡು ಲಂಗೋಟಿಯ ಉಟ್ಟು
ಆಸರೆಗಾಗಿ ಕೈಯಲ್ಲಿ
ಕೋಲು ಹಿಡಿದ ಗಾಂಧಿ.
ಆಸಮತೆಯ ಅಗ್ನಿಗೆ
ಆಹುತಿಯರಾಗಿರುವೆವು ನಾವು
ಆ ಧಣಿಯರ ಕಾಲೀಗೆ
ಚಪ್ಪಲಿ ಮೆಟ್ಟು ಹೊಲಿದು
ಬರಿಗಾಲಿನಿಂದ
ತಿರುಗುತ್ತಿದ್ದೇವೆ ಗಾಂಧಿ;
ನಮ್ಮ ಕೆಂಪನ್ನು ರಕ್ತ ಸುಟ್ಟು
ಕಪ್ಪನ್ನ ಮೋಡವಾಗುತ್ತಿದೆ.
ಈ ದೇಶದ ಚರಿತ್ರೆಯಲ್ಲಿ
ಗುಡಿಸಲುಗಳ ಸುಡಿಸಿಕೊಂಡ
ಜೀವಂತ ಬೇಯಿಸಿಕೊಂಡ
ದುಡುಮೆಯನು ಮಾಡಿಕೊಂಡ
ಜನತೆ;
ಗಾಂಧಿ, ಗಾಂಧಿಗಳ ಬಗ್ಗೆ
ಸತ್ಯ ಅರಿಯುವದು
ಸರಿಯಲ್ಲವೇ ಗಾಂಧಿ?
*****
Related Post
ಸಣ್ಣ ಕತೆ
-
ರಣಹದ್ದುಗಳು
ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…
-
ಮೌನರಾಗ
ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…
-
ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ
ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್ಗೆ ಕಾಲ್ಚೆಂಡು ಆಟ… Read more…
-
ಪ್ರೇಮನಗರಿಯಲ್ಲಿ ಮದುವೆ
ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…
-
ಸಿಹಿಸುದ್ದಿ
ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…